ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಪರಂಪರೆಗೆ ಕಿರೀಟವಿಟ್ಟ ಸಾಲಿಗ್ರಾಮ ಮಕ್ಕಳ ಮೇಳ : ಏರ್ಯ ಲಕ್ಷ್ಮೀನಾರಾಯಣ ಆಳ್ವ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜುಲೈ 15 , 2015
ಜುಲೈ 15, 2015

ಪರಂಪರೆಗೆ ಕಿರೀಟವಿಟ್ಟ ಸಾಲಿಗ್ರಾಮ ಮಕ್ಕಳ ಮೇಳ : ಏರ್ಯ ಲಕ್ಷ್ಮೀನಾರಾಯಣ ಆಳ್ವ

ಮಂಗಳೂರು : ಸಾಲಿಗ್ರಾಮ ಮಕ್ಕಳ ಮೇಳ ಕಳೆದ 40 ವರ್ಷದಿಂದ ಮಕ್ಕಳ ಯಕ್ಷಗಾನ ರಂಗಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಇಂದು ನಮಗೆ ಪರಂಪರೆಯ ಯಕ್ಷಗಾನವನ್ನು ನೋಡ ಬೇಕೆಂದರೆ ಸಾಲಿಗ್ರಾಮ ಮಕ್ಕಳ ಮೇಳದ ಆಟ ನೋಡಬೇಕು ಎಂದು ಸಾಹಿತಿ ಮೊಡಂಕಾಪು ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು. ಶನಿವಾರ ಮಂಗಳೂರಿನ ಡಾನ್ ಬಾಸ್ಕೋ ಹಾಲ್‌ನಲ್ಲಿ ಕಲ್ಕೂರ ಪ್ರತಿಷ್ಠಾನ ಆಶ್ರಯದಲ್ಲಿ ಜರುಗಿದ ಸಾಲಿಗ್ರಾಮ ಮಕ್ಕಳ ಮೇಳದ 'ವೀರವೃಷಸೇನ ವರುಷ 40ರ ಹರುಷ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಮಾತನಾಡಿ ವಿಭಿನ್ನ ಪಾರಂಪರ್ಯವನ್ನು ಬಡಗಿನಲ್ಲಿ ತೋರಿಸಿಕೊಟ್ಟವರು ಸಾಲಿಗ್ರಾಮ ಮಕ್ಕಳ ಮೇಳ. ಮಕ್ಕಳ ಮೇಳ ಕಟ್ಟುವುದು ಕಷ್ಟದ ಕೆಲಸ. ಅಲ್ಲದೇ ಪ್ರತಿ ವರ್ಷ ಹೊಸ ಹೊಸ ಮಕ್ಕಳನ್ನು ಸಜ್ಜುಗೊಳಿಸಿ ರಂಗಕ್ಕೆ ತರಬೇಕು ಎಂದರು.

ಯಕ್ಷಗಾನ ವಿದ್ವಾಂಸರು, ಸಂಶೋಧಕರಾದ ಡಾ.ಎಂ.ಪ್ರಭಾಕರ ಜೋಷಿ ಮಾತನಾಡಿ ತತ್ವ ಸಿದ್ಧಾಂತವನ್ನು ಮುಂದಿಟ್ಟ ಸಾಲಿಗ್ರಾಮ ಮಕ್ಕಳ ಮೇಳದ ವೀರವೃಷಸೇನ ಪ್ರಸಂಗದ ಪ್ರದರ್ಶನ ಇಂದಿಗೂ ಜನ ಮೆಚ್ಚುಗೆ ಪಡೆದಿದೆ. ಯಕ್ಷಗಾನ ರಂಗ ಭೂಮಿಯಲ್ಲಿ ಗುರುತಿಸಬೇಕಾದ ಗಮನಾರ್ಹ ಸಾಧನೆ ಇದಾಗಿದೆ. ಒಂದು ದೇವ ಕುಲವನ್ನು ನಿರ್ಮಾಣ ಮಾಡಿದ ಹಾಗೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ಶ್ರೀಧರ ಹಂದೆಯವರ ಮನೆ ಈಗಲೂ ಗುರುಕುಲ. ಎಲ್ಲಾ ಹವ್ಯಾಸಿ, ವೃತ್ತಿ ಮೇಳಕ್ಕೂ ಆದರ್ಶ ಪ್ರಾಯವಾದ ಮಕ್ಕಳ ಮೇಳ ವೀರವೃಷಸೇನ ಪ್ರಸಂಗದ ಪ್ರದರ್ಶನ 40 ವರ್ಷ ಕಳೆದರೂ ಅದು ಜನಮೆಚ್ಚುಗೆ ಪಡೆಯುತ್ತಿದೆ ಎಂದರು.

ಕರ್ನಾಟಕ ಬ್ಯಾಂಕಿನ ಹಿರಿಯ ಮಹಾ ಪ್ರಬಂಧಕ ಪಿ. ಜಯರಾಮ ಹಂದೆ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮಕ್ಕಳ ಮೇಳದ ನಿರ್ದೇಶಕರಾದ ಶ್ರೀಧರ ಹಂದೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕುಂಬ್ಳೆ ಸುಂದರರಾವ್, ಡಾ. ಎಂ.ಪ್ರಭಾಕರ ಜೋಷಿ ಮತ್ತು ಪ್ರದೀಪ್ ಕುಮಾರ ಕಲ್ಕೂರ ಅವರನ್ನು ಕಲಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಹಾಗೆ 40 ವರ್ಷದಿಂದಲೂ ಮಕ್ಕಳ ಮೇಳದಲ್ಲಿ ಸೇವೆ ನೀಡುತ್ತಿರುವ ಬಿರ್ತಿ ಬಾಲಕೃಷ್ಣ, ಮಾಧವ ಮಣೂರು ಮತ್ತು ಕೃಷ್ಣಸ್ವಾಮಿ ಜೋಯಿಷ ಅವರನ್ನು ಗುರುತಿಸಲಾಯಿತು. ಸಂಘಟಕ ಎಚ್. ಜನಾರ್ದನ ಹಂದೆ ಸ್ವಾಗತಿಸಿದರು. ಕಲಾವಿದ ಸುಜಯೀಂದ್ರ ಹಂದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ 'ವೀರ ವೃಷಸೇನ' ಯಕ್ಷಗಾನ ನಡೆಯಿತು.


ಕೃಪೆ : vijaykarnataka

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ